ಹಾಡು ಕೇಳಿ
ಕವನ-ಎನ್.ಎಸ್.ಲಕ್ಶ್ಮೀನಾರಾಯಣ ಭಟ್ಟ
ಗಾಯಕಿ-ರತ್ನಮಾಲ
ನನ್ನ ಮುದ್ದು ಚಿಲಿಪಿಲಿ ಗಿಳಿಯೇ
ಬಂಗಾರ ತುಂಬಿದ ಗಣಿಯೇ
ಹೂನಗೆ ಅರಳಿದೀ ಮುಖಕೆ
ಹುಣ್ಣಿಮೆ ಆಕಾಶ ಎಣೆಯೇ
ಹೇಗಿರದೆ ನೀನಿದ್ದೆ ಮಗುವೇ
ಕತ್ತಲಾಗಿತ್ತಲ್ಲೆ ಜಗವೇ
ನೀ ಬಂದು ನಗಲು ಈ ಇಳೆಗೇ
ಹರಿದಿದೆ ಬೆಳಕಿನ ಹೊಳೆಯೇ
ರಸಹೀನವಾಗಿತ್ತು ಬಾಳು
ಈಗ ಮೊಸರು,ಹಾಲು,ಬೆಣ್ಣೆ,ಜೇನು
ಹಾಳು ಸುರಿಯುತ್ತಿದ್ದ ಹಾದಿ
ಈಗ ದೇವರ ಉತ್ಸವದ ಬೀದಿ
ಜನ್ಮ ಜನ್ಮದ ಪೂಜೆ ಫಲಿಸಿ
ದೇವರೇ ಬಂದರೋ ಹರಸಿ
ಬರೆದಿತ್ತ ತೋಳಿನ ತುಂಬ
ಉಡುಪಿ ಕೃಷ್ಣನ ಮುದ್ದು ಬಿಂಬ
ಜೋ ಜೋ ಜೋ ಜೋ ಜೋ ಜೋ
1 comment:
ತುಂಬ ಮುದ್ದಾಗಿದೆ ಪೋಸ್.
Post a Comment